SN Subbareddy: ಬಾಗೇಪಲ್ಲಿ ಕಾಂಗ್ರೆಸ್ ಶಾಸಕನಿಗೆ ಬಿಗ್ ಶಾಕ್; ಸುಬ್ಬಾರೆಡ್ಡಿ ಆಯ್ಕೆ ಅಸಿಂಧು ಎಂದ ಕೋರ್ಟ್! ಕಾರಣ ಏನು?

Avatar photo

ಅಸಿಂಧುಗೊಂಡ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಗೆದ್ದಿದ್ದು 19 ಸಾವಿರ ಮತಗಳ ಅಂತರದಿಂದ! ಆಸ್ತಿ ಎಷ್ಟಿತ್ತು? ಮುಂದೇನು?

ಕಾಂಗ್ರೆಸ್‌ ನಾಯಕ ಸುಬ್ಬಾರೆಡ್ಡಿ ಶಾಸಕ ಸ್ಥಾನ ಅಸಿಂಧುಗೊಳಿಸಿ ಹೈಕೋರ್ಟ್‌ ಆದೇಶ ನೀಡಿದೆ. ಅವರು ಚುನಾವಣೆ ಆಯೋಗಕ್ಕೆ ಆಸ್ತಿ ಸೇರಿದಂತೆ ಹಲವು ವಿವರ ತಪ್ಪಾಗಿ ನೀಡಿದ್ದಾರೆ ಎಂದು ಈ ಕ್ರಮಕೈಗೊಳ್ಳಲಾಗಿದೆ. ಸದ್ಯ ಸುಬ್ಬಾರೆಡ್ಡಿ ಆಸ್ತಿ ಎಷ್ಟಿತ್ತು? ಎಷ್ಟು ಅಂತರಗಳಿಂದ ಗೆಲುವು ಸಾಧಿಸಿದ್ದರು? ಬಿಜೆಪಿ ಅಭ್ಯರ್ಥಿಗಳಿಸಿದ ಮತಗಳೆಷ್ಟು? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು: ಬಾಗೇಪಲ್ಲಿ ಕಾಂಗ್ರೆಸ್‌ ಶಾಸಕ ಎಸ್‌ಎನ್‌ ಸುಬ್ಬಾರೆಡ್ಡಿ ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್‌ ಅವರ ಶಾಸಕತ್ವವನ್ನ ಅಸಿಂಧುಗೊಳಿಸಿದೆ. ಸದ್ಯ ಅವರು ಚುನಾವಣಾ ಆಯೋಗದ ಮುಂದೆ ಘೋಷಣೆ ಮಾಡಿದ ಆಸ್ತಿ, ಗೆಲುವು ಸಾಧಿಸಿದ ಮತಗಳ ಅಂತರ ಕುರಿತು ಚರ್ಚೆ ಮುನ್ನೆಲೆಗೆ ಬಂದಿದೆ.

ಎಸ್‌ಎನ್‌ ಸುಬ್ಬಾರೆಡ್ಡಿಯವರು ಸತತ ಮೂರು ಬಾರಿ ಬಾಗೇಪಲ್ಲಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2013 ರಲ್ಲಿ ಮೊದಲ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು, ಆ ಬಳಿಕ 2018 ಹಾಗೂ 2023 ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಉದ್ಯಮಿಯಾಗಿರುವ ಸುಬ್ಬಾರೆಡ್ಡಿ ಆಸ್ತಿ ಗಳಿಕೆ ಹೆಚ್ಚಿತ್ತು.

19 ಸಾವಿರ ಮತಗಳ ಅಂತರದಿಂದ ಗೆಲುವು

ಸುಬ್ಬಾರೆಡ್ಡಿ ಅವರು 2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬರೋಬ್ಬರಿ 19 ಸಾವಿರ ಮತಗಳ ಅಂತರಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸುಬ್ಬಾರೆಡ್ಡಿ 82,128 ಮತಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿ ಅಭ್ಯರ್ಥಿ ಮುನಿರಾಜು 62,949 ಮತಗಳನ್ನು ಗಳಿಸಿಕೊಂಡಿದ್ದರು. 2018 ರಲ್ಲಿ 14 ಸಾವಿರ, 2013 ರಲ್ಲಿ 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.

SN Subbareddy: ಆಸ್ತಿ ಎಷ್ಟಿದೆ?

2023 ರ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗ ಮುಂದೆ ತನ್ನ ಬಳಿ 313 ಕೋಟಿ ರೂ. ಮೌಲ್ಯದ ಆಸ್ತಿ ಇದೆ ಎಂದು ಘೋಷಣೆ ಮಾಡಿಕೊಂಡಿದ್ದರು. 70 ಕೋಟಿ ರೂ. ಸಾಲ ಇತ್ತು. ಇನ್ನು ಹಿಂದಿನ ಚುನಾವಣೆ ಸಂದರ್ಭದಲ್ಲಿ ಅಂದರೆ, 2013 ರಲ್ಲಿ 86 ಕೋಟಿ ರೂ. ಹಾಗೂ 2018 ರಲ್ಲಿ 157 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದರು. ಚುನಾವಣೆಯಿಂದ ಚುನಾವಣೆಗೆ ಆಸ್ತಿ ಮೌಲ್ಯವು ದುಪ್ಪಟ್ಟಾಗಿತ್ತು.

Subbareddy: (ಸುಬ್ಬಾರೆಡ್ಡಿ) ಮೇಲೆ ಇಡಿ ದಾಳಿ

ಸುಬ್ಬಾರೆಡ್ಡಿ ಮನೆ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಕಳೆದ ವರ್ಷ ಜುಲೈನಲ್ಲಿ ದಾಳಿ ನಡೆಸಿತ್ತು. ವಿದೇಶಿ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿದ್ದಾರೆ, ವಿದೇಶಿ ವಹಿವಾಟುಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು.

ಆರೋಪ ರುಜುವಾದರೆ ಸರ್ಕಾರಕ್ಕೆ ಆಸ್ತಿ ದಾನ ಮಾಡುವೆ ಎಂದಿದ್ದ ಶಾಸಕ!

ಸುಬ್ಬಾರೆಡ್ಡಿ ತಮ್ಮ ಮೇಲೆ ಕೇಳಿ ಬಂದ ವಿದೇಶದಲ್ಲಿ ಅಕ್ರಮ ಆಸ್ತಿ ಆರೋಪಗಳನ್ನು ತಳ್ಳಿ ಹಾಕಿದ್ದು, ಸಾಭೀತಾದರೆ ಎಲ್ಲಾ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡುವೆ ಎಂದು ಹೇಳಿದ್ದರು. ಇನ್ನು ಇಡಿ ದಾಳಿಯ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಆರೋಪ ಮಾಡಿದ್ದರು.

ಹೋರಾಟದಲ್ಲಿ ಜಯಗಳಿಸಿದ್ದೇವೆ

” ನಾಮಪತ್ರ ಸಲ್ಲಿಸುವಾಗ ಸೂಕ್ತ ಮಾಹಿತಿ ನೀಡಿಲ್ಲ. ಸಾವಿರಾರು ಕೋಟಿ ಹಣದ ಬಗ್ಗೆ ಮಾಹಿತಿ ಬಹಿರಂಗ ಪಡೆಸಿಲ್ಲ. ಹೈಕೋರ್ಟ್‌ ಅವರ ಶಾಸಕತ್ವವನ್ನು ಅಸಿಂಧುಗೊಳಿಸಿರುವುದಕ್ಕೆ ನನಗೆ ಖುಷಿ ಇದೆ. ವರ್ಷಗಳಿಂದ ನಡೆಸ ಹೋರಾಟದಲ್ಲಿ ಜಯಗಳಿಸಿದ್ದೇವೆ ” ಎಂದು ಬಿಜೆಪಿಯಿಂದ ಸ್ಪರ್ಧಿಕ 2ನೇ ಸ್ಥಾನ ಪಡೆದುಕೊಂಡಿದ್ದ ಅಭ್ಯರ್ಥಿ ಸಿ ಮುನಿರಾಜು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಂದೇನು?

SN Subbareddy:  ಶಾಸಕ ಸ್ಥಾನ ಅಸಿಂಧುಗೊಳಿಸಿರುವ ಹೈಕೋರ್ಟ್‌ ಮಧ್ಯಂತರ ತಡೆಯನ್ನು ನೀಡಿದೆ. ಮುಂದೆ ಸುಬ್ಬಾರೆಡ್ಡಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕು. ಹೈಕೋರ್ಟ್‌ನ ಅಸಿಂಧು ತೀರ್ಪನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದರೆ ಮಾತ್ರ ಶಾಸಕ ಸ್ಥಾನ ಉಳಿಯಲಿದೆ. ಇಲ್ಲವಾದರೆ, 6 ತಿಂಗಳ ಬಳಿಕ ಮರು ಚುನಾವಣೆ ನಡೆಯಲಿದೆ.

 

Be the first to comment

Leave a Reply

Your email address will not be published. Required fields are marked *

ad image